Monday, November 19, 2018

ಅಪವಾದ

ಅಂದು ಮನೆಗೆ ಬರಲು ಹಂಬಲಿಸಿದ ಮಗ 
ಆದರೆ ಹಡೆದವರ ಮನಸ್ಸಿಗೆ ಹುಳಿ ಹಿಂಡಿತ್ತು ಜಗ
ಜಗಕೆ ಬೇಡವಾಗಿತ್ತು ಮಗನೊಡನೆ ಬರುವ ಅವನ ಜಗ 
ಅವನನ್ನು  ಮನೆಯಿಂದಲೇ  ನೂಕಿತ್ತು ಕಪಟ ಮೊಗ 

ಅಂದು ಮನೆ ಮಗನನ್ನು ಮರೆತರೂ 
ಮಗ ಮನೆಯನ್ನು ಮರೆಯಲಿಲ್ಲ 
ಕಷ್ಟಗಳ ಕೋಟಲೆಯಲ್ಲಿ ಸಿಲುಕಿದ್ದರೂ 
ಹಡೆದವರನ್ನು ಪೀಡಿಸಿ ಕಾಡಲಿಲ್ಲ 

ಕಾಣಲಿಲ್ಲ ಮಗನ ಮನಸ್ಸಿನ ವೇತನೇ 
ಕೇಳಲಿಲ್ಲಅವನ  ಮೂಖ ರೋದನೆ
ಮರೆತ ಮನೆ ಇಂದು ಮಗ ಬರಲಿಲ್ಲವೆಂದು ದೂಷಿಸಿದೆ
ಕಪಟ ಮೊಗ ಕುಟಿಲ ತಂತ್ರ ರೂಪಿಸಿದೆ 

ಅಂದಿಗೂ ಇಂದಿಗೂ ಎಂದೆಂದಿಗೂ ಮಗ ಮೌನಿ 
ಭಾವನೆಗಳನ್ನು ಎದೆಯೊಳಗಿರಿಸಿ ಹೋರಾಡಿದ ಶೂರಿ 
ಪರರ ಮಾತಿಗೆ ತಲೆ ಬಾಗಿದ ಹಡೆದವರು 
ಮಗನ ಮನಸ್ಸನ್ನು ಅರಿಯದೇನೇ   ಹೋದರು ..